ಹೀಗೆ ಒಂದು ಸಂಜೆ ಅಜ್ಜ
ನನ್ನೊಳಗೆ ಬರಹದ
ಬೀಜ ಬಿತ್ತಿದ್ದ
ಬಹುಶಃ ಅದು ಮೊದಲು
ಅವನಲ್ಲಿ ಹುಟ್ಟಿದ
ಕನಸಾಗಿರಬೇಕು
ಸದ್ದಿಲ್ಲದೆ ನನಗೆ ದಾಟಿಸಿ ಬಿಟ್ಟಿದ್ದ
ನಾ ಸುಮ್ಮನೆ ಪುಸ್ತಕ
ಕೈಗೆತ್ತಿದಾಗೆಲ್ಲಾ ಅವನ
ಕಣ್ಣು ಅಕಾರಣ ಹೊಳೆಯುತ್ತಿತ್ತು
ಒಂದು ಸ್ಪಷ್ಟ ಕನಸು ಆಗಲೇ
ರೂಪುಗೊಂಡಿರಲೂ ಬಹುದು
ಅವನ ಧೀಮಂತ ನಿಲುವು
ನನಗಿನ್ನೂ ನೆನಪಿದೆ
ಎಷ್ಟು ಬಾರಿ ಬೆರಗಾದದ್ದಿದೆಯೋ
ಅಷ್ಟೂ ಬಾರಿ ಅವನು
ಆಶ್ಚರ್ಯಸೂಚಕ ಚಿಹ್ನೆಯಾಗಿಯೇ
ಉಳಿದುಬಿಡುತ್ತಿದ್ದ
ಇಷ್ಟೇ ಇದ್ದ ಕರಗಳ ಮಧ್ಯೆ
ಪುಸ್ತಕವಿಟ್ಟಾಗಲೇ ಅಕ್ಷರಗಳೊಂದಿನ
ಅವನ ಜೀವ ಪ್ರಜ್ಞೆ
ನನ್ನೊಳಗೆ ಸಂಚಲಾರಭಿಸಿತ್ತು
ಈಗೇನಿದ್ದರೂ ಅದರ ಪುನರ್ನವೀಕರಣ ಅಷ್ಟೆ
ಒಮ್ಮೊಮ್ಮೆ ಸರಳ, ಸುಲಭ
ಇನ್ನೂ ಕೆಲವೊಮ್ಮೆ ಜಟಿಲ, ಸಂಕೀರ್ಣ
ನಿಜ, ನನ್ನ ಯಾವ ಕವಿತೆಗೂ
ಅವನನ್ನು ಸಂಪೂರ್ಣ ದಕ್ಕಿಸಿಕೊಳ್ಳಲಾಗದು
ಅವನ ಮಾತು, ಮೌನ
ಚರ್ಯೆ, ಬದುಕಿನ ಕುರುಹು
ಕೊನೆಗೊಂದು ಕಣ್ಣೋಟವಾದರೂ
ಕವಿತೆಯ ಪರಿಧಿಯೊಳಗೆ ಬಂದರೆ
ಅವ ಬಿತ್ತಿದ ಬೀಜ
ಭೋದಿ ವೃಕ್ಷವಾಯಿತೆಂದು ಸಂತಸಿಸುತ್ತೇನೆ.
ನನ್ನೊಳಗೆ ಬರಹದ
ಬೀಜ ಬಿತ್ತಿದ್ದ
ಬಹುಶಃ ಅದು ಮೊದಲು
ಅವನಲ್ಲಿ ಹುಟ್ಟಿದ
ಕನಸಾಗಿರಬೇಕು
ಸದ್ದಿಲ್ಲದೆ ನನಗೆ ದಾಟಿಸಿ ಬಿಟ್ಟಿದ್ದ
ನಾ ಸುಮ್ಮನೆ ಪುಸ್ತಕ
ಕೈಗೆತ್ತಿದಾಗೆಲ್ಲಾ ಅವನ
ಕಣ್ಣು ಅಕಾರಣ ಹೊಳೆಯುತ್ತಿತ್ತು
ಒಂದು ಸ್ಪಷ್ಟ ಕನಸು ಆಗಲೇ
ರೂಪುಗೊಂಡಿರಲೂ ಬಹುದು
ಅವನ ಧೀಮಂತ ನಿಲುವು
ನನಗಿನ್ನೂ ನೆನಪಿದೆ
ಎಷ್ಟು ಬಾರಿ ಬೆರಗಾದದ್ದಿದೆಯೋ
ಅಷ್ಟೂ ಬಾರಿ ಅವನು
ಆಶ್ಚರ್ಯಸೂಚಕ ಚಿಹ್ನೆಯಾಗಿಯೇ
ಉಳಿದುಬಿಡುತ್ತಿದ್ದ
ಇಷ್ಟೇ ಇದ್ದ ಕರಗಳ ಮಧ್ಯೆ
ಪುಸ್ತಕವಿಟ್ಟಾಗಲೇ ಅಕ್ಷರಗಳೊಂದಿನ
ಅವನ ಜೀವ ಪ್ರಜ್ಞೆ
ನನ್ನೊಳಗೆ ಸಂಚಲಾರಭಿಸಿತ್ತು
ಈಗೇನಿದ್ದರೂ ಅದರ ಪುನರ್ನವೀಕರಣ ಅಷ್ಟೆ
ಒಮ್ಮೊಮ್ಮೆ ಸರಳ, ಸುಲಭ
ಇನ್ನೂ ಕೆಲವೊಮ್ಮೆ ಜಟಿಲ, ಸಂಕೀರ್ಣ
ನಿಜ, ನನ್ನ ಯಾವ ಕವಿತೆಗೂ
ಅವನನ್ನು ಸಂಪೂರ್ಣ ದಕ್ಕಿಸಿಕೊಳ್ಳಲಾಗದು
ಅವನ ಮಾತು, ಮೌನ
ಚರ್ಯೆ, ಬದುಕಿನ ಕುರುಹು
ಕೊನೆಗೊಂದು ಕಣ್ಣೋಟವಾದರೂ
ಕವಿತೆಯ ಪರಿಧಿಯೊಳಗೆ ಬಂದರೆ
ಅವ ಬಿತ್ತಿದ ಬೀಜ
ಭೋದಿ ವೃಕ್ಷವಾಯಿತೆಂದು ಸಂತಸಿಸುತ್ತೇನೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ