ನಿರ್ದಯಿ ಆಗಬೇಡ ಬದುಕೇ
ಮತ್ತೆ ಕೊಡು ಕಿತ್ತುಕೊಂಡ ಕನಸನು
ಸಾಲದ ರೂಪದಲ್ಲಾದರೂ...
ನಿನ್ನೆಗಳಲಿ ಕಳೆದು ಹೋಗಿರುವೆ
ಮತ್ತೆ ಮರಳಬೇಕಿದೆ ಇಂದಿಗೆ
ಮುಸ್ಸಂಜೆಯ ಮಬ್ಬುಗತ್ತಲಿನಲಿ ಅಸ್ತಮಿಸಿದರೂ
ಬೆಳಕ ನೀಡಲು ಮತ್ತೆ ಬರುವನು ನೇಸರ
ಅಮವಾಸ್ಯೆಯ ಕಗ್ಗತ್ತಲಲ್ಲಿ ಕರಗಿ ಹೋದರೂ
ಮತ್ತೆ ಮೂಡಿ ಬರುವನು ಚಂದಿರ
ಮತ್ತೇಕೆ ನಿನಗೆ ಮಾತ್ರ ಈ ನಿರ್ದಯತೆ..?
ಬಾಳ ಧಿಕ್ಕರಿಸುವ ಮುನ್ನ
ಉಸಿರು ನಿಲ್ಲುವ ಮುನ್ನ
ಉತ್ತರಿಸು ಬದುಕೇ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ