ಅಮ್ಮ ಬೆಳೆಸಿದ ಸಾಸಿವೆ ಗಿಡ
ಬುಡ ಸಮೇತ ಕಿತ್ತು ಬಿದ್ದಿದೆ
ರೋಹಿಂಗ್ಯಾ ತತ್ತರಿಸುತ್ತಿದೆ
ಬುದ್ಧನ ಕಣ್ಣಲ್ಲೂ ತೆಳು ನೀರು
ಕಾಳರಿಸಿ ನೆಲಕ್ಕಿಳಿದ ಹಕ್ಕಿಯ
ರೆಕ್ಕೆ ಕಳಚಿ ಬಿದ್ದಿದೆ ಇಲ್ಲಿ
ಭೀತಿಗೆ ಸಿಕ್ಕ ಹಸುಳೆಯ
ಆಕ್ರಂದನ ಮುಗಿಲು ಮುಟ್ಟಿದೆ ಅಲ್ಲಿ
ನೀರು ಕುದಿಯುತ್ತಿದೆ ಅನ್ನದ ಪಾತ್ರೆಯಲಿ
ಸೋರುವ ಮನೆಯ ಮಾಡಿನಡಿಯಲಿ
ಸುತ್ತ ಬೆಂಕಿ ಹಬ್ಬಿದರೂ
ಬದುಕು ಬೇಯುತ್ತಿಲ್ಲ; ಉರಿಯುತ್ತಿದೆ
ಮರಣ ಮೃದಂಗದ ರುದ್ರ ನಾದದಲಿ
ಬೇರು ಸಂಧಿಸಿದೆ ರಕ್ತ ಕಾಲುವೆಯ
ಬ್ರಹ್ಮಾಂಡಕ್ಕೆಲ್ಲಾ ಗಾಢ ನಿದ್ದೆ
ಶಾಂತಿದೂತರಿಗೂ ಜಾಣ ಕುರುಡು
ದೇಶ ಭಾಷೆ ಧರ್ಮ ಬಣ್ಣಗಳ
ಮೀರಿ ಜೀವವೆಂದರೆ ಜೀವವಷ್ಟೆ
ಬಡಿತ ಮಿಡಿತಗಳಲ್ಲೂ ಭಿನ್ನತೆಯಿಲ್ಲ
ಉಸಿರಿನ ಲಯ ಏರಿಳಿತಗಳೂ ಒಂದೇ
ಕ್ರೌರ್ಯಮುಖೀ ಅಹಂಕಾರದ ಆಕ್ರಮಣಶೀಲತೆಗೆ
ಕರಗುವ ಮರುಗುವ ಮನಸ್ಸುಗಳೇ
ಗುಟುಕು ಕರುಣೆಗಾಗಿ ಯಾಚಿಸುವವರ
ಬಗೆಗೂ ಹಿಡಿಯಷ್ಟು ದಯೆಯಿರಲಿ.
ಬುಡ ಸಮೇತ ಕಿತ್ತು ಬಿದ್ದಿದೆ
ರೋಹಿಂಗ್ಯಾ ತತ್ತರಿಸುತ್ತಿದೆ
ಬುದ್ಧನ ಕಣ್ಣಲ್ಲೂ ತೆಳು ನೀರು
ಕಾಳರಿಸಿ ನೆಲಕ್ಕಿಳಿದ ಹಕ್ಕಿಯ
ರೆಕ್ಕೆ ಕಳಚಿ ಬಿದ್ದಿದೆ ಇಲ್ಲಿ
ಭೀತಿಗೆ ಸಿಕ್ಕ ಹಸುಳೆಯ
ಆಕ್ರಂದನ ಮುಗಿಲು ಮುಟ್ಟಿದೆ ಅಲ್ಲಿ
ನೀರು ಕುದಿಯುತ್ತಿದೆ ಅನ್ನದ ಪಾತ್ರೆಯಲಿ
ಸೋರುವ ಮನೆಯ ಮಾಡಿನಡಿಯಲಿ
ಸುತ್ತ ಬೆಂಕಿ ಹಬ್ಬಿದರೂ
ಬದುಕು ಬೇಯುತ್ತಿಲ್ಲ; ಉರಿಯುತ್ತಿದೆ
ಮರಣ ಮೃದಂಗದ ರುದ್ರ ನಾದದಲಿ
ಬೇರು ಸಂಧಿಸಿದೆ ರಕ್ತ ಕಾಲುವೆಯ
ಬ್ರಹ್ಮಾಂಡಕ್ಕೆಲ್ಲಾ ಗಾಢ ನಿದ್ದೆ
ಶಾಂತಿದೂತರಿಗೂ ಜಾಣ ಕುರುಡು
ದೇಶ ಭಾಷೆ ಧರ್ಮ ಬಣ್ಣಗಳ
ಮೀರಿ ಜೀವವೆಂದರೆ ಜೀವವಷ್ಟೆ
ಬಡಿತ ಮಿಡಿತಗಳಲ್ಲೂ ಭಿನ್ನತೆಯಿಲ್ಲ
ಉಸಿರಿನ ಲಯ ಏರಿಳಿತಗಳೂ ಒಂದೇ
ಕ್ರೌರ್ಯಮುಖೀ ಅಹಂಕಾರದ ಆಕ್ರಮಣಶೀಲತೆಗೆ
ಕರಗುವ ಮರುಗುವ ಮನಸ್ಸುಗಳೇ
ಗುಟುಕು ಕರುಣೆಗಾಗಿ ಯಾಚಿಸುವವರ
ಬಗೆಗೂ ಹಿಡಿಯಷ್ಟು ದಯೆಯಿರಲಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ